Slide
Slide
Slide
previous arrow
next arrow

ಬ್ಲ್ಯಾಕ್‌ಮೇಲ್ ಆರೋಪ; ನೇಪಾಳದಲ್ಲಿ ರವೀಶ ಹೆಗಡೆ ಸೊಂಡ್ಲಬೈಲು ಬಂಧನ

300x250 AD

ಶಿರಸಿ: ಕಾರು ಖರೀದಿಸುವುದಾಗಿ ನಕಲಿ ದಾಖಲೆ ಪತ್ರ ಸಲ್ಲಿಸಿ, ಕೆಡಿಸಿಸಿ ಬ್ಯಾಂಕ್‌ಗೆ ಮೋಸ ಮಾಡಿದ ಆರೋಪಿ ಹಾಗೂ ಜ್ಯುವೆಲರ್ ಪುತ್ರನ ಆತ್ಮಹತ್ಯೆಗೆ ಕಾರಣನೆಂದು ಆರೋಪಿಸಲಾದ ತಾಲೂಕಿನ ಅಜ್ಜೀಬಳ ಸಮೀಪದ ಸೊಂಡಲಬೈಲ್‌ನ ರವೀಶ ಹೆಗಡೆಯನ್ನು ನೇಪಾಳದ ಕಠ್ಮಂಡುವಿನಲ್ಲಿ ಶಿರಸಿ ಪೊಲೀಸರು ಬಂಧಿಸಿದ್ದಾರೆ.

ಕ್ರೇಟಾ ಕಾರು ಖರೀದಿಸುವ ನೆಪದಲ್ಲಿ ಕೆಡಿಸಿಸಿ ಬ್ಯಾಂಕ್ ಗೆ ನಕಲಿ ದಾಖಲೆಪತ್ರಗಳನ್ನು ಸಲ್ಲಿಸಿ, ಬ್ಯಾಂಕ್‌ಗೆ ಮೋಸಮಾಡಿದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಸಿಪಿಬಜಾ‌ರ್ ಶಾಖೆಯ ವ್ಯವಸ್ಥಾಪಕರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ನಡೆದು ಸಾಕಷ್ಟು ದಿನಗಳ ನಂತರ ಆರೋಪಿತ ರವೀಶ ಹೆಗಡೆಯನ್ನು ಬಂಧಿಸುವಲ್ಲಿ ನಗರ ಠಾಣೆ ಪಿ.ಎಸ್.ಐ ನಾಗಪ್ಪ ನೇತೃತ್ವದ ತಂಡ ಯಶಸ್ವಿಯಾಗಿದೆ. ಶಿರಸಿ ಕಾಮಧೇನು ಜ್ಯುವೆಲರಿ ಮಾಲಿಕನ ಮಗ ಪ್ರೀತಂ ಪಾಲನಕರ ಆತ್ಮಹತ್ಯೆಗೆ ಈತನ ಬ್ಲ್ಯಾಕ್‌ಮೇಲ್ ತಂತ್ರ ಕಾರಣವೆಂದು ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

300x250 AD
Share This
300x250 AD
300x250 AD
300x250 AD
Back to top